ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ ಗಾಂಜಾ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಬಂಧಿತ ವ್ಯಕ್ತಿ ರತನಲಾಲ್ ರಾಮಚಂದ್ರ ಶರ್ಮಾ ರಾಜಸ್ಥಾನದ ಉದಯಪುರದವನಾಗಿದ್ದು ಸದಸ್ಯ ಮಂಚಿಕೇರಿಯಲ್ಲಿ ವಾಸ್ತವ್ಯದಲ್ಲಿದ್ದವನಾಗಿದ್ದಾನೆ. ಮಂಚಿಕೇರಿ ಪಿ.ಯು ಕಾಲೇಜಿನ ಎದುರು ರಸ್ತೆ ಪಕ್ಕ ಗಾಂಜಾ ಮಾರುತ್ತಿದ್ದ ಈತನಿಂದ 7000 ರು ಮೌಲ್ಯದ ಗಾಂಜಾವನ್ನು ಮತ್ತು ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.